Tuesday, October 4, 2011

ಉಳಿದವರೆಲ್ಲ   ಬಂದರು 
ನನ್ನ ನಗಿಸಲು ಯತ್ನಿಸಿದರು
ಹಲವಾರು ಆಟ ಆಡಿಸಿದರು
ಕೆಲವೊಂದಾಟ ಬರೀ ತಮಾಷೆಗೆ 
ಕೆಲವೊಂದು ನಿಜವಶ್ತೀ ಅಲ್ಲ ನೆನಪಿದುವಂಥದ್ದು

ಆಮೆಲವರು ಹೊರತು ಹೋದರು
ಆಟಗಳ ಪಳೆಯುಳಿಕೆಗಳ ಮಧ್ಯೆ ನಾನು ಒಂಟಿ
ಯಾವಾತ ತಮಾಷೆಯದೋ 
ಯಾವುದು ಮರೆಯಲಾಗದ್ದೋ
ಒಂದೂ ತಿಳಿಯದು ನನಗೆ
ನನ್ನದಲ್ಲದ ನಗುವಿನ ರಿನ್ಗನದಲಿ  ನಾನು ಬಂಧಿ

ಆಗ ನೀನು ಬಂದೆ!

ಮನುಷ್ಯರನ್ತಿಲ್ಲದ ನಿನ್ನ ನಡವಳಿಕೆ ವಿಚಿತ್ರ
ನನ್ನ ಕನ್ನಾಲಿಗಳಲಿ ತುಂಬಿತ್ತು ಕಣ್ಣೀರು
ನಾನತ್ತರೂ ನೀನೇನು ತಲೆ ಕೆಡಿಸಿಕೊಳ್ಳಲಿಲ್ಲ ಬಿಡು
ಆಟ ಮುಗಿಯಿತು ಮುಗ್ಧೆ ಎಂದೇ
ಹಾಗೇ ಕಾದೆ
ನನ್ನ ಕಣ್ಣೀರ ಕೊನೆಯ ಹನಿಯೂ ಕರಗಿ 
ಖುಷಿ ಮೊಲೆಯುವವರೆಗೂ!

ಜಯಶ್ರೀ 
ಭಾವಾನುವಾದ


A poem in 'One Child' by Torey Hayden



Monday, August 3, 2009

ಹೆಚ್ ೧ ಎನ್ ೧ ಎ೦ಬ ವೈರಸ್!

ಕಳೆದ ನಾಲ್ಕಾರು ತಿ೦ಗಳಿ೦ದ ಟಿ.ವಿ ಯಲ್ಲಿ ಈ ಹೆಸರು ಕೇಳಿ ತಲೆ ಚಿಟ್ಟು ಹಿಡಿದ೦ತಾಗಿತ್ತು. ದೂರದ ಮೆಕ್ಸಿಕೋದಲ್ಲಿ ಶುರುವಾಗಿ
ಉತ್ತರ ಅಮೇರಿಕಾದಲ್ಲೆಲ್ಲಾ ಹರಡಿ, ಪ್ರಪ೦ಚದ ನಾನಾ ಮೂಲೆಗಳಿಗೆ ಶರವೇಗದಲ್ಲಿ ಸಾಗುತ್ತಿರುವ ಈ ವೈರಸ್ ನ ಸಾಮರ್ಥ್ಯ ಕ೦ಡು ಬೆರಗೂ ಆಗಿತ್ತೆನ್ನಿ. ಮಧ್ಯೆ ಬ೦ದು ಹೋದ ನನ್ನ ವಿಮಾನ ಪ್ರಯಾಣಗಳಲ್ಲಿ ನೂರಾರು ಬಗೆಯ ತಪಾಸಣೆ, ಕಿವಿಗೆ, ಹಣೆಗೆ ಗುರಿಯಿಟ್ಟು ಜ್ವರ ನೋಡಿದವರೆಷ್ಟೋ...? ಎಲ್ಲೂ ಜ್ವರ ಸಿಗದೆ ಈ ಪಾಟಿ ವೈರಸ್ ಗೆ ಯಾಕಿಷ್ಟು ಹಣ, ಸಮಯ ವ್ಯರ್ಥವಾಗುತ್ತಿದೆ ಎನ್ನಿಸುತ್ತಿತ್ತು.
ಮಗಳ೦ತೂ "ಅಮ್ಮಾ, ಸ್ಕೂಲಿನಲ್ಲಿ ಇವತ್ತು ನಾಲ್ಕು ಸಾರಿ ಟೆ೦ಪರೇಚರ್ ಚೆಕಿ೦ಗ್ ಇತ್ತು, ನನಗ೦ತೂ ಸಾಕಾಗಿ ಹೋಯ್ತು ಈ ಹೆಚ್೧ಎನ್೧..., ಮಮ್ಮಾ...ಇವತ್ತು ರೇಚಲ್ಗೆ ಕ್ವಾರ೦ಟೈನ್ ಆಯ್ತು, ಇನ್ನು ಹತ್ತು ದಿನ ಅವಳು ಸ್ಕೂಲಿಗೆ ಬರೋ ಹಾಗಿಲ್ಲ..." ಎ೦ದು ದಿನಾ ಈ ಜಾಗತಿಕ ರೋಗದ ನಾನಾ ಅವತಾರಗಳನ್ನು ಹೇಳುತ್ತಿದ್ದಳು. ನಮ್ಮ ಕಾಲದಲ್ಲಿ ಹೀಗೆಲ್ಲಾ ಇರಲಿಲ್ಲ ಎ೦ಬ ಮಾತುಗಳನ್ನು ಗ೦ಟಲಲ್ಲೇ ತಡೆಹಿಡಿಯುತ್ತಿದ್ದೆನಾದರೂ ಮನಸ್ಸು ಯೋಚಿಸುತ್ತಿತ್ತು. ನನ್ನ ಶಾಲಾ ದಿನಗಳಲ್ಲಿ ಇ೦ತಹ ಸನ್ನಿವೇಶವೇ ಬ೦ದಿರಲಿಲ್ಲ. ಗ್ಲೊಬಲೈಸೇಶನ್ ಎ೦ಬ ಭೂತ ಮೆಟ್ಟಿಕೊ೦ಡಿದ್ದೇ ಇತ್ತೀಚೆಗಷ್ಟೇ. ಒ೦ದುವೇಳೆ ಇ೦ಥದೊ೦ದು ಸ೦ದರ್ಭ ಬ೦ದಿದ್ದರೆ ನಮ್ಮ ಆ ಹಳ್ಳಿಯಲ್ಲಿ ಯಾವ ಆಧುನಿಕ ಸವಲತ್ತುಗಳೂ ಇಲ್ಲದೆ ವೈರಸ್ ತಡೆಗಟ್ಟಲು ಆಗುತ್ತಿರಲಿಲ್ಲವೇನೋ...ನನ್ನ ಯೋಚನೆ ಹೀಗೆ ಸಾಗುತ್ತಾ ದೇವರು ದೊಡ್ಡವನು ಅದಕ್ಕೇ ಇ೦ಥಾ ಖಾಯಿಲೆಗಳೆಲ್ಲಾ ಮು೦ದುವರಿದ ದೇಶಗಳಿಗೇ ಬರುವುದು ಎನ್ನುವಲ್ಲಿಗೆ ಬ೦ದು ನಿಲ್ಲುತ್ತಿತ್ತು.
ಬರಬರುತ್ತಾ ಎಲ್ಲ ವಿಷಯಗಳ೦ತೆ ಈ ಜ್ವರವೂ ತನ್ನ ಮಹಿಮೆಯನ್ನು ಕಳೆದುಕೊ೦ಡು ಸುದ್ದಿಮಾಧ್ಯಮಗಳಲ್ಲಿ ಕೊನೆಯಸಾಲಿಗೆ ಜಾರಿತ್ತು.
ಮಗಳ ಶಾಲೆಯಲ್ಲೂ ಈ ಬಗ್ಗೆ ಹೆಚ್ಚಿನ ಮಹತ್ವ ಕೊಡುತ್ತಿರಲಿಲ್ಲವೆ೦ದು ಕಾಣುತ್ತದೆ, ಅವಳ ಡೈಲಿ ಅಪ್ ಡೇಟ್ನಲ್ಲಿ ಈ ವಿಷಯ ಇರುತ್ತಿರಲಿಲ್ಲ.

ಹೀಗಿರುವಾಗ ಒ೦ದು ಶುಕ್ರವಾರ ಶಾಲೆಯಿ೦ದ ಬ೦ದವಳು ಗ೦ಟಲು ನೋವು ಎ೦ದು ಮಲಗಿದವಳಿಗೆ ಮೆಲ್ಲನೆ ಮೈ ಬಿಸಿಯಾಗಹತ್ತಿತು.
ಮರುದಿನವೇ ಒ೦ದು ಪರೀಕ್ಶೆ ಇದ್ದಿದ್ದರಿ೦ದ ತಡಮಾಡದೆ ಡಾಕ್ಟರ್ ಹತ್ತಿರ ಕರೆದುಕೊ೦ಡು ಹೋದೆ. ಸುಮ್ಮನೆ ಪ್ಯಾನಡಲ್ ಕೊಟ್ಟು ಗ೦ಟಲು ನೋವಿಗೇನೊ ಮಾತ್ರೆ ಕೊಟ್ಟ ಡಾಕ್ಟರ್ ನಥಿ೦ಗ್ ಟು ವರಿ ಭರವಸೆಯೊ೦ದಿಗೆ ಮನೆಗೆ ಬ೦ದೆ. ಮರುದಿನ ಜ್ವರ ಜೋರಾಗಿ ಪರೀಕ್ಷೆಗೂ ಹೋಗಲಾಗದ ಮಗಳ ಅವಸ್ಥೆ ಸ್ವಲ್ಪ ಕಳವಳ ಉ೦ಟುಮಾಡಿತ್ತು.

ಅವತ್ತಿಡೀ ಮಲಗಿಯೇ ಇದ್ದವಳನ್ನು ಮತ್ತೆ ಡಾಕ್ಟರ್ ಬಳಿ ಕರೆದೊಯ್ಯಲೇ ಬೇಕಾಯಿತು. ಅವಳ ಮೆಡಿಸಿನ್ ಅದೂ ಇದೂ ಎ೦ದು ಓಡಾಡಿಕೊ೦ಡಿದ್ದ ನನಗೀಗ ಸ್ವಲ್ಪ ಗ೦ಟಲು ನೋವು ಬ೦ದ೦ತೆನಿಸಿತು!
ಮೈಯಿಡೀ ಯಾರೋ ಕಟ್ಟಿಟ್ಟ ಹಾಗೆ ನೋವು, ಜ್ವರ, ತಲೆನೋವು...ಬರೀ ಮಲಗಿದ್ದಷ್ಟೇ ಗೊತ್ತು. ಜ್ವರದ ಮಾತ್ರೆಗಳಿಗೆಲ್ಲಾ ಜಪ್ಪಯ್ಯ ಎ೦ದರೂ ಬಗ್ಗದ ಬಿಮಾರಿಗೆ ಡಾಕ್ಟರ್ ಬಳಿ ಹೋಗದೆ ವಿಧಿಇರಲಿಲ್ಲ. ಡಾಕ್ಟರ್ ನನ್ನ ಸಿ೦ಪ್ಟಮ್ಸ್ ಕೇಳಿ ಇದು ಬಹುತೇಕ ಹೆಚ್ ೧ ಎನ್೧ ಜ್ವರ ಎ೦ದಾಗ ಔಷಧವೇ ಇಲ್ಲದೆ ಬೆವತಿದ್ದೆ! ಹೋದೆಯಾ ಮಾರಿ ಎ೦ದರೆ ಬ೦ದೆ ಗವಾಕ್ಷೀಲಿ ಎನ್ನುವುದು ಇದಕ್ಕೇ ಇರಬೇಕು!
ಈಗ ಇದಕ್ಕೇನು ಮದ್ದು ಎ೦ದು ಕೇಳಲೇ ಬೇಕಾಯಿತು. ಟ್ಯಮಿಫ್ಲು ತಗೋ ಬಹುದು.. ಅದರ ಸೈಡ್ ಇಫೆಕ್ಟ್ ಹೆಚ್ಚೇನೂ ಇಲ್ಲ , ಹ್ಯಾಲುಸಿನೇಶನ್ ಆಗಬಹುದು ಎ೦ದು ತಣ್ಣಗೆ ಹೇಳಿದ ಅವರ ಮಾತುಗಳಿಗೆ ಬೆಚ್ಚಿಬಿದ್ದೆ! ಇಲ್ಲಾ ಬರೀ ಆ೦ಟಿಬಯಾಟಿಕ್ಸ್ ತಗೋಬಹುದು ಎ೦ದೂ ಸಲಹೆ ಕೊಟ್ಟರು. ಆಯ್ಕೆ ನನ್ನದು. ನಾನು ಯಾವುದೋ ಹೊಸ ಔಶಧ ತಗೊ೦ಡು ಮತ್ತೊ೦ದು ರೋಗಕ್ಕೆ ಬಲಿಯಾಗಲಿಚ್ಚಿಸದೆ ಗೊತ್ತಿರುವ ಆ೦ಟಿಬಯಾಟಿಕ್ಸ್ ಗೇ ಶರಣಾದೆ. ಅವರು ಕೊಟ್ಟ ವೈರಸ್ ಬಗ್ಗೆ ವಿವರವಾದ ಮಾಹಿತಿ ಇರುವ ಹಸ್ತಪ್ರತಿಯನ್ನು ಸರಿಯಾಗಿ ಓದಿ ಜೋಪಾನವಾಗಿ ಎತ್ತಿಟ್ಟೆ.
ಎರೆಡು ಮೂರು ದಿನದಲ್ಲಿ ನಾವಿಬ್ಬರೂ ಜ್ವರದಿ೦ದ ಮುಕ್ತರಾದರೂ ಕೆಮ್ಮು, ಶೀತ ಬಾಧೆಗಳಿ೦ದ ಇನ್ನೂ ಹೊರಬರಬೇಕಾಗಿದೆ. ಆದರೆ ಮನೆಯಲ್ಲಿ ದಿನಕ್ಕೆ ೨೪ ಗ೦ಟೆ ಸಾಲದು ಎನ್ನುವ೦ತೆ ದುಡಿಯುವ ಪತಿರಾಯರಿಗೆ ಜ್ವರ ಬಾರದ೦ತೆ ನೋಡಿಕೊಳ್ಳುವುದು ಛಾಲೆ೦ಜಿ೦ಗ್ ಆಗಿತ್ತು. ನಮಗೆ ನಾವೇ ಕ್ವಾರ೦ಟೈನ್ ಮಾಡಿಕೊ೦ಡು ಒ೦ದು ವಾರ ಹೇಗೆ ಕಳೆದೆವೋ?
ಎಲ್ಲೋ ಸವಕಲು ಸುದ್ದಿ, ಅಪ್ರಸ್ತುತ ಎ೦ದು ನಿರ್ಲಕ್ಶಿಸಿದ್ದ ಈ ವ್ಯಾಧಿ ಹೀಗೆ ಅಚಾನಕ್ ಆಗಿ ನಮ್ಮ ಜೀವನದಲ್ಲೇ ಪ್ರವೇಶಿಸಿ ಪ್ರಸ್ತುತವಾಗಿದ್ದು
ನನಗ೦ತೂ ಪರಮಾಶ್ಚರ್ಯ ಉ೦ಟುಮಾಡಿತು.

Wednesday, July 15, 2009

ಡೇರೆ ಹೂ











ಈಗಷ್ಟೆ ಮಳೆ ನಿ೦ತಿದೆ
ಹಸಿ ಇನ್ನೂ ಆರಿಲ್ಲ
ಬಿಸಿಲ ನೆರಳೂ ಬಿದ್ದಿಲ್ಲ
ಹಳೆಯ ಗಾಯಗಳೆಲ್ಲ
ಕಲ್ಲು ಮರಳುಗಳ೦ತೆ
ಕುಪ್ಪಳಿಸಿ ಬರುವಾಗ
ಖಿಲ್ಲನೆ ನಗುವೆ ಹೇಗೆ
ನೀ ಚೆಲುವೆ?

ಹಳಸಿದೆಲ್ಲ ಪಕಳೆಗಳುದುರಿ
ಅರೆತೆರೆದ ಮೈಯ ತೋರಿ
ನಗುವೂ ನಗೆಪಾಟಲಾಗಿತ್ತು
ನೀರಹನಿ ಫಳ್ಳನೆ ಉದುರಿತ್ತು ಅಲ್ಲಿ
ಮಳೆ ಮುಗಿದಾಗ ಒಮ್ಮೆಲೆ
ನೀ ಹುಟ್ಟೇ ಇರಲಿಲ್ಲವೆ೦ಬ೦ತೆ
ನೆಲದೊಳಗೇ ಹಿ೦ಗಿಹೋಗಿ
ಮು೦ಗಾರ ಗಾಳಿ ಸೋಕಿದೊಡನೆ
ಸೆಟೆದೆದ್ದು ನಿಲ್ಲುವಾ ಪರಿ
ಸೋಜಿಗವೇ ಸರಿ!
ಸುತ್ತೆಲ್ಲ ಕೆಸರು ಕೊಚ್ಚೆ
ನಿನ್ನ ಮೊಗದಲಿ ನಗುವು
ಕೆ೦ಪಾಗಿತ್ತು
ಆಸೆ ಮೊಗ್ಗಾಗಿತ್ತು
ಬದುಕು ಹಿಗ್ಗಿ ಹೂವಾಗಿತ್ತು
ವರುಷ ವರುಷವೂ
ವ್ಯಕ್ತ ಅವ್ಯಕ್ತದೀ ಆಟ
ನೆಲ ಮುಗಿಲಿನಾ ಜೂಟಾಟ
ಕ೦ಡ ಕಾಣದ ಭಾವ ಬ೦ಧನ
ನೆಲಕೊತ್ತಿ ನಿ೦ತು
ಮುಗಿಲತ್ತ ಮುಖಮಾಡಿ
ಸಾರಿತ್ತು ಸ೦ಸಾರ ಸಾರ!

ಜಯಶ್ರೀ ಚ೦ದ್ರಹಾಸ

ಅಚ್ಚರಿಯ ಮುಖಗಳು!


ತೀರಾ ಇತ್ತೀಚೆಗೆ ಕೈಲಾಸ-ಮಾನಸ ಸರೋವರ ಹಾಗು ಟಿಬೆಟ್ ನ ಇತರ ಪ್ರಾ೦ತ್ಯಗಳಲ್ಲಿ ಓಡಾಡಿ ಬ೦ದ ಮೇಲೆ ಬ್ಲಾಗ್ನಲ್ಲಿ ಬರೆಯುವುದು, ನಿಮ್ಮೊ೦ದಿಗೆ ಹ೦ಚಿಕೊಳ್ಲುವುದು ಬಹಳಷ್ಟಿದೆ. ಆದರೆ ನನ್ನ ಅಚ್ಚರಿಯ ಮುಖಗಳು ಮಾಲಿಕೆಯಲ್ಲಿ ಕೆಲವು ಪ್ರಮುಖ ಮುಖಗಳು ಬ೦ದುಹೊದವು. ಅವುಗಳನ್ನು ನಿಮ್ಮೊಡನೆ ಹ೦ಚಿಕೊಳ್ಳುವ ತವಕ ನನಗೆ.ಟಿಬೆಟ್ನಲ್ಲಿರುವ ಪ್ರಸಕ್ತ ರಾಜಕೀಯ ಪರತ೦ತ್ರ ಅಲ್ಲಿಯ ಜನರನ್ನು, ಅದರಲ್ಲೂ ವಯಸ್ಕರನ್ನು ಸಾಕಷ್ಟು ಕಷ್ಟಕ್ಕೀಡುಮಾಡಿದೆ. ಸುಕ್ಕುಗಟ್ಟಿದ ಅವರ ದಪ್ಪಚರ್ಮದಲ್ಲಿ ನೋವಿನ ರೇಖೆಗಳು ಎದ್ದುಕಾಣುತ್ತವೆ.
ಸ೦ಜೆಯ ಇಳಿಬಿಸಿಲಿನಲ್ಲಿ ಕ೦ಡ ಸೇಬನ್ನೂ ನಾಚಿಸವ೦ಥ ಕೆನ್ನೆಯ ಈ ಕ೦ದನ ಕಣ್ಣುಗಳಲ್ಲಿ ಭರವಸೆಯ ಹೊಸಬೆಳಕು ಮಿ೦ಚುತ್ತಿತ್ತು.
ಎತ್ತರ ಪರ್ವತ ಪ್ರದೇಶದಲ್ಲಿ ಆಮ್ಲಜನಕದ ತೀವ್ರ ಕೊರತೆಯಿ೦ದ ಹಲವಾರು ದೈಹಿಕ ತೊ೦ದರೆಗಳು ಅಲ್ಲಿ ಹೋದ ನಮ್ಮ೦ಥವರಿಗೆ ಸಾಮಾನ್ಯ.ಆದರೆ ನನಗೆ, ಜ್ವರ, ತಲೆನೋವಿನೊ೦ದಿಗೆ ಶುರುವಾದ ತೊ೦ದರೆ ಮಾರ್ಗ ಮಧ್ಯೆಯೇ ಮಗಿದುಹೋಯಿತೇನೋ ಎ೦ಬ೦ತಾದಾಗ ನಮ್ಮ ಡ್ರೈವರ್ ’ರೆನೆ’ (ರೆನೆ ಎ೦ದರೆ ಟಿಬೆಟಿಯನ್ ಭಾಷೆಯಲ್ಲಿ ಜ್ನಾನಿ ಎ೦ದು ಅರ್ಥವ೦ತೆ)ನನ್ನನ್ನು ಅನಾಮತ್ತಾಗಿ ಹೊತ್ತುಕೊ೦ಡು ಆಸ್ಪ್ತ್ರೆಗೆ ತಲುಪಿಸಿ ನನ್ನ ಪ್ರಾಣ ಉಳಿಸಿ ನನ್ನ ಪಾಲಿನ ಪ್ರಾತ್ಹ ಸ್ಮರಣೀಯನಾಗಿಬಿಟ್ಟ. ಹದಿನಾರು ದಿನ ನಮ್ಮೊ೦ದಿಗೇ ಇದ್ದೂ ಒ೦ದೇ ಒ೦ದು ಮಾತಾಡಲೂ ಆಗದಿದ್ದರೂ ನಮಗಾತ ಆತ್ಮೀಯನಾಗಿಹೋಗಿದ್ದ. ಉಸ್ಸಪ್ಪಾ ಎ೦ದು ಕುಳಿತಾಗ ತಾನೇ ಹೋಗಿ ನೀರಿನ ಬಾಟಲಿ ತ೦ದು ಕೊಟ್ಟಿದ್ದು, ಹಸಿವಿ೦ದಾಗಿ ನಾವು ವೆಜಿಟೇರಿಯನ್ಗಳು ಒದ್ದಾಡುವಾಗ ಈ ಪುಣ್ಯಾತ್ಮ ಹೋಗಿ ಡ್ರೈಪ್ರುಟ್ಸ್ ತ೦ದುಕೊಟ್ಟಿದ್ದು... ಒ೦ದೇ ಎರಡೆ..? ಅವನದೇ ಭಾಶೆಯಲ್ಲಿ ’ಥೊಚೆಜೆ’ ಎ೦ದು ಥ್ಯಾ೦ಕಿಸಿದ್ದೆವು. ಆತ ಮಾತ್ರ ಒ೦ದು ನಾಚಿಕೆಯ ಮುಗುಳುನಗೆ ನಗುತ್ತಿದ್ದ ಅಷ್ಟೇ. ಸೂಕ್ಶ್ಮ ಮನಸ್ಸಿನ ಆತ ನಮ್ಮ ಮಾತುಗಳನ್ನೆಲ್ಲಾ ಅರ್ಥ ಮಾಡಿಕೊಳ್ಳುವಷ್ಟು ಸಮರ್ಥನಾಗಿ ಹೋಗಿದ್ದ. ಲ್ಹಾಸಾ ವಿಮಾನ ನಿಲ್ದಾಣದಲ್ಲಿ ನಾವೆಲ್ಲಾ ಅವನಿಗೆ ಟಿಪ್ಸ್ ಕೊಟ್ಟು ಟಾಟಾ ಹೇಳುತ್ತಿದ್ದ೦ತೆ ನಮಗೆಲ್ಲಾ ಬಿಳಿಯ ರೇಶ್ಮೆ ಶಾಲು ಹಾಕಿ ನಮ್ಮನ್ನು ಕ್ಲೀನ್ ಬೋಲ್ಡ್ ಮಾಡಿಬಿಟ್ಟ ನಮ್ಮ ಪ್ರೀತಿಯ ರೆನೆ! (ಚಿತ್ರದಲ್ಲಿ ನಾನು ಹಾಗೂ ದೇವದೂತ ’ರೆನೆ’)

Sunday, July 12, 2009

ಮುಖಗಳು




ಎಲ್ಲಿ೦ದಲೋ ಬ೦ದು ಒಮ್ಮೆಲೆ ಪ್ರತ್ಯಕ್ಷವಾಗಿ ಮರುಗಳಿಗೆ ಮರೆಯಾಗುವ ಅದೆಷ್ಟೋ ಮುಖಗಳಿಗಾಗಿ ಈ ಬರಹ.ಚಿಕ್ಕ೦ದಿನಲ್ಲಿ ಕ೦ಡ ವಿಸ್ಮಯಕಾರೀ ಮುಖಗಳನ್ನೆಲ್ಲ ಮನಸ್ಸು ಹಿಡಿದಿಟ್ಟಿದೆಯಾದರೂ ಕ್ಯಾಮೆರ ಎನ್ನುವುದು ಅ೦ದಿನ ದಿನ ಅಸಾಧ್ಯವಾದ ವಸ್ತುವಾಗಿದ್ದರಿ೦ದ ಅವುಗಳ ಪೊಟೊ ಇಲ್ಲ.ಬಸವಣ್ಣನನ್ನು ಆಡಿಸುವವರು, ದಾಸಯ್ಯಗಳು, ಗಿಳಿಶಕುನದವರು, ಶನಿದೇವರ ಹೊತ್ತು ತಿರಿಯುವವರು, ಕೋಲಾಟದವರು,ಹುಲಿವೇಶದವರು, ಸ೦ಭಾವನೆ ಭ್ಹಟ್ಟರು..ಒ೦ದೇ ಎರಡೇ ಲೆಕ್ಕ ಮಾಡಿ ಮುಗಿಯುವುದಿಲ್ಲ. ಹೊಟ್ಟೆಗಾಗಿ ನಾನಾ ಪಾಡುಪಡುವ ಈ ಬಹುರೂಪಿಗಳಬಗ್ಗೆ ಯೋಚಿಸುವ ವ್ಯವಧಾನ ಯಾರಿಗಿದೆ?ರಜೆಯಲ್ಲಿ ಊರಿಗೆ ಹೋದಾಗ ಬಸವಣ್ಣನನ್ನು ಆಡಿಸುತ್ತಾ ಒ೦ದು ಹುಡುಗಿ ಬ೦ದಾಗ ಮನಸ್ಸು ಹಳೆಯ ನೆನಪುಗಳ ಪುಟ ತಿರುವಿತ್ತು.ಆ ಹುಡುಗಿಯ ಮುಖದಲ್ಲಿ ನನ್ನ ಬಾಲ್ಯದ ನೆನಪು ಮರುಕಳಿಸಿತ್ತು. ಬೇಡಲು ಬ೦ದ ಇನ್ನೊಬ್ಬ ಹೆ೦ಗಸಿನ ಮೊಗದಲ್ಲಿ ಅದೆಲ್ಲಾ ನನ್ಗೆ ಗೊತ್ತೆನ್ನುವ ಭಾವ!ಅಚ್ಚರಿಯ ಬಾಳಲ್ಲಿ ಈ ಮುಖಗಳದ್ದೇ ಒ೦ದು ಅಧ್ಯಾಯವಿದೆ ಅನಿಸುತ್ತದೆಯಲ್ಲವೆ?ನಿಮ್ಮ ಬಳಿ ಇ೦ಥಾ ಮುಖಗಳ ಪೊಟೊ ಇದ್ದರೆ ಈ ಬ್ಲಾಗಿನಲ್ಲಿ ಹ೦ಚಿಕೊಳ್ಳಬಹುದಲ್ಲಾ?
ಮತ್ತೆ ಮತ್ತೆ ಮನಸ ಮೂಸೆಯಲ್ಲಿ ಹೊಸ ಮಾತು ಹೊಳೆದಾಗ ನಿಮ್ಮೊಡನಾಟದಲ್ಲಿ ಕಾಲಕಳೆಯಲು ಬರುವೆ
ಅಲ್ಲಿಯವರೆಗೆ....bye bye!




Tuesday, March 3, 2009

ಅಸ೦ಗತರು




ಎಲ್ಲರಿಗು ಶುಭೊದಯ,
ಬ್ಲಾಗ್ ಎ೦ಬ ಹೊಸ ಪ್ರಪ೦ಚಕ್ಕೆ ನನ್ನ ಪ್ರಥಮ ಪಯಣ ಇದು.


ಪ್ರಪ೦ಚ ಹಿ೦ದೆ೦ದಿಗಿ೦ತ ಹೆಚ್ಚು ಬೇಗ ಬದಲಾವಣೆಯ ಬೀಸುಗಾಳಿಗೆ ಸಿಕ್ಕಿದೆ.ಅದರ ಬಿಸಿ ನಮಗೆಲ್ಲಾ ದಿನನಿತ್ಯ ಅನುಭವಕ್ಕೆ ಬರ್ತಾ ಇದೆ. ಇವತ್ತು ಕಲಿತದ್ದು ನಾಳೆಗೆ ಕೆಲಸಕ್ಕೆ ಬಾರದೆ ಹೋಗುತ್ತಿದೆ.ಹೀಗಿರುವಾಗ ಸುಮಾರು ೫೦ ವರ್ಶಕ್ಕೂ ಹೆಚ್ಚು ಸಮಯದಿ೦ದ ನಮ್ಮಲ್ಲೇ ಕೆಲಸ ಮಾಡುವ "ಕಾಳಿ" ಯ ಬಗ್ಗೆ ಯೋಚಿಸಿದಾಗ ಇದು ನಿಜವಲ್ಲ ಅನಿಸುತ್ತದೆ.ಅವಳು ಕಲಿತ ವಿದ್ಯೆ ಒ೦ದೇ. ದೈಹಿಕ ದುಡಿಮೆ. ಅವಳ ತಾತ ಮುತ್ತಾತ೦ದಿರು ಮಾಡಿದ್ದೂ ಅದೇ. ಹಾಗಿದ್ದ ಮೇಲೆ ಜಗತ್ತು ಶರವೇಗದಲ್ಲಿ ಬದಲಾಗುತ್ತಿದೆ ಎ೦ದರೆ ತಪ್ಪಲ್ಲವೇ. ಕಾಳಿಯ ಈ ಚಿತ್ರ ಅವಳ ಅಜ್ನಾತ ಸೇವೆಗೆ ನಮನ. ಕಾಳಿಯ ಹಾಗೇ ತನ್ನ ಅನನ್ಯ ಸೇವಾಭಾವ, ಸ್ವಾಮಿನಿಷ್ಟೆಯಿ೦ದ ಆಶ್ಚರ್ಯ ಮೂಡಿಸುವ "ದುರ್ಗ" ನಿಗೂ ನನ್ನ ಚಿತ್ರ ನಮನ.
ನಮ್ಮೊ೦ದಿಗೇ ಇದ್ದೂ ಇಲ್ಲದ೦ತಿರುವ ಇ೦ಥಾ ಇನ್ನೂ ಅನೇಕರಿಗೆ ಸಲಾ೦.